Slide
Slide
Slide
previous arrow
next arrow

ಯುವಕರ ತೊಡಗುವಿಕೆಯಿಂದ ಕಲೆಯ ನೆಲೆ ಇನ್ನಷ್ಟು ಗಟ್ಟಿ: ಸುಬ್ಬಣ್ಣ ಕುಂಟೆಗುಳಿ

300x250 AD

ಯಲ್ಲಾಪುರ: ಕಲೆ ಸಂಘಟನೆಯಲ್ಲಿ ಯುವಕರು ಹೆಚ್ಚು ತೊಡಗಿಸಿಕೊಂಡರೆ ಕಲೆಯ ನೆಲೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯ ಎಂದು ಮಾವಿನಮನೆ ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ ಹೇಳಿದರು.

ಅವರು ತಾಲೂಕಿನ ಬಾಸಲ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯ ಕಲಾವಿದರ ಸಾಧನೆಯನ್ನು ಸಮಾಜದೆದುರು ತೆರೆದಿಡುವ ಪ್ರಯತ್ನ ಶ್ಲಾಘನೀಯ. ಇತರ ಕಲಾ ಪ್ರಕಾರಗಳಿಗೂ ಈ ಕಾರ್ಯ ವಿಸ್ತಾರವಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಅರ್ಥಧಾರಿ ಗೋಪಾಲ ಹೆಗಡೆ ಚಾವಡಿ ಮಾತನಾಡಿ, ತಾಳಮದ್ದಲೆ ವಿಶೇಷವಾದ ಕಲೆ. ಜ್ಞಾನ, ಮಾತಿನ ಕೌಶಲ್ಯ, ಪೌರಾಣಿಕ ಹಿನ್ನೆಲೆಯ ಅರಿವು ಎಲ್ಲವೂ ಇದರಿಂದ ಸಿಗುತ್ತದೆ. ಇಂತಹ ಕಲೆಯ ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆಯುವ ಜೊತೆಗೆ, ಅದರ ಮಹತ್ವವನ್ನೂ ಸಾರುವ ಕಾರ್ಯ ಆಗಬೇಕು ಎಂದರು.

300x250 AD

ಗ್ರಾ.ಪಂ ಸದಸ್ಯ ಮಾಚಣ್ಣ ಹಲಗುಮನೆ, ಮಾವಿನಮನೆ ಸೇವಾ ಸಹಕಾರಿ ಸಂಘದ ನಿರ್ದೇಶಕ ಶಿವರಾಮ ಭಟ್ಟ ಬಾಸಲ ಇದ್ದರು. ಸಂಸ್ಥೆಯ ಖಜಾಂಚಿ ದಿನೇಶ ಭಟ್ಟ ಯಲ್ಲಾಪುರ ಪ್ರಾರ್ಥಿಸಿದರು. ಸಹಕಾರ್ಯದರ್ಶಿ ದಿನೇಶ ಗೌಡ ಸ್ವಾಗತಿಸಿ, ನಿರ್ವಹಿಸಿದರು. ಅಧ್ಯಕ್ಷ ಶ್ರೀಧರ ಅಣಲಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ ವಂದಿಸಿದರು.

ನಂತರ ನಡೆದ ಸುಧನ್ವಾರ್ಜು ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ ಯಲ್ಲಾಪುರ, ವಿಘ್ನೇಶ್ವರ ಕುಂಟೆಮನೆ, ಗಣಪತಿ ಗಾಂವ್ಕರ ಹುಟುರ್ತೆ, ಮದ್ದಲೆವಾದಕರಾಗಿ ಸುಬ್ರಾಯ ಭಟ್ಟ ಗಾಣಗದ್ದೆ ಭಾಗವಹಿಸಿದ್ದರು. ಸುಧನ್ವನಾಗಿ ನಾಗರಾಜ ಭಟ್ಟ ಕುಂಕಿಪಾಲ, ಅರ್ಜುನನಾಗಿ ಮಂಜುನಾಥ ಗಾಂವ್ಕರ ಮೂಲೆಮನೆ, ಪ್ರಭಾವತಿಯಾಗಿ ಸದಾಶಿವ ಮಲವಳ್ಳಿ, ಸುಗರ್ಭೆಯಾಗಿ ಗಣಪತಿ ಭಟ್ಟ ಹಲಗುಮನೆ, ಪ್ರದ್ಯುಮ್ನನಾಗಿ ಶ್ರೀಧರ ಅಣಲಗಾರ, ಕೃಷ್ಣನಾಗಿ ದೀಪಕ ಭಟ್ಟ ಕುಂಕಿ, ವೃಷಕೇತುವಾಗಿ ಪ್ರಸನ್ನ ಗಾಂವ್ಕರ ವಾಗಳ್ಳಿ, ಹಂಸಧ್ವಜನಾಗಿ ದಿನೇಶ ಗೌಡ ಪಾತ್ರ ಚಿತ್ರಣ ನೀಡಿದರು.

Share This
300x250 AD
300x250 AD
300x250 AD
Back to top